Slide
Slide
Slide
previous arrow
next arrow

ಸೆ.6ಕ್ಕೆ ಗೋಪಾಲಕೃಷ್ಣ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

300x250 AD

ಶಿರಸಿ : ನಗರದ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಿರಸಿ ಇದರಲ್ಲಿ ಸೆ.6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದೇವರ ಪೂಜೆ ಪ್ರಾರಂಭವಾಗಿ ಉದಯಾಸ್ತಮಾನ ಪೂಜೆ, ಫಲ ಪಂಚಾಮೃತ ಮಹಾಭಿಷೇಕ, ಸಹಸ್ರ ನಾಮಾರ್ಚನೆ, ಅಷ್ಟೋತ್ತರ ಶತ ತುಲಸಿ ಅರ್ಚನೆ ಸರ್ವಾಲಂಕಾರದೊಂದಿಗೆ ತ್ರಿಕಾಲ ಪೂಜೆ ನಡೆಯಲಿದ್ದು, ನಾಡಿನ ಭಕ್ತ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರೀ ದೇವರಲ್ಲಿ ಸಂಕಲ್ಪ ಪೂರ್ವಕ ಮಹಾಪ್ರಾರ್ಥನೆ ಮಾಡಲಾಗುವದು ಹಾಗೂ ದೇವಸ್ಥಾನದ ನವೀಕರಣದಲ್ಲಿ ಪಾಲ್ಗೊಂಡ ಎಲ್ಲಾ ದಾನಿಗಳ ಕುಟುಂಬದ ಬಗ್ಗೆ ವಿಶೇಷ ಪ್ರಾರ್ಥನೆ ಮಾಡಲಾಗುವದು ಎಂದು ದೇವಸ್ಥಾನದಿಂದ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD

ರಾತ್ರಿ 9 ಗಂಟೆಯಿಂದ ತೊಟ್ಟಿಲೋತ್ಸವ ಮಹಾಪೂಜೆ ಮಹಾಮಂಗಳಾರತಿ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಮೊಕ್ತೇಸರ ವಿವೇಕಾನಂದ ರಾಘವೇಂದ್ರ ಕಾಮತ್ ಕೋರಿದ್ದಾರೆ.

Share This
300x250 AD
300x250 AD
300x250 AD
Back to top